Wednesday, July 1, 2009

ಮತ್ಸರ

ನೆರಳ ಕೊಡುವವು ಎಲ್ಲ ಮರಗಳು
ಪೂಜೆ ಮಾತ್ರ ಅರಳಿಗೆ;
ದುಡಿದು ದಣಿದವು ಕಾಲು ಕೈಗಳು
ಹಾರ ಮಾತ್ರ ಕೊರಳಿಗೆ.

ಹಾಡು ಕೋಗಿಲೆ ಎನ್ನಲೇಕೆ?
ಹಾದಲಾರರೆ ಇತರರು?
ಅಳಿಲ ಸೇವೆಯ ನೆನೆದ ರಾಮ
ದುಡಿಯಲಿಲ್ಲವೇ ಕಪಿಗಳು?

ಕಾಲ ಕಾಲಕೆ ಇಳಿವ ಮಳೆಯ
ನೆನೆಸಿತೆಂದು ಶಪಿಸುವೆ
ಮುನಿದು ಮತ್ತೆ ಬಾರದಿದ್ದರೆ
ಮತ್ತದಕ್ಕೆ ತಪಿಸುವೆ

ಗಿಡ ಮರಗಳಿಗೆ, ಹಾಡು ಹಕ್ಕಿಗೆ
ಇಲ್ಲಧಂಥ ಮತ್ಸರ
ನಮಗೆ ನೀಡಿದೆ ಏಕೋ ದೇವ?
ಕೊಂಚ ಬದಲಿಸಲಾರೆಯಾ?

No comments:

Post a Comment