Wednesday, July 1, 2009

ಸಾರ್ಥಕತೆ

ನಗುವದೆಲ್ಲ ಹೂವಿಗಿರಲಿ
ಭೂಮಿತಾಯಿ ನಲಿಯಲಿ,
ನೋವದೆಲ್ಲ ಕವಿಗೆ ಇರಲಿ
ನೂರು ಕವಿತೆ ಅರಳಲಿ.

ಬೆವರ ಹನಿಯು ರೈತನಾಸ್ತಿ
ಅನ್ನ ನಮಗೆ ಕೊಡಲಿ.
ನಿನ್ನ ವರವು ತಾಯಿಗಿರಲಿ
ಮಡಿಲ ಕಂದ ನಗಲಿ.

ಸೋಲು ಎಂದೂ ಮನಸಿಗಿರಲಿ
ಒಲವು ಅರಳುತಿರಲಿ,
ಧರ್ಮ ಬಾಳನಾಳುತಿರಲಿ
ನೀತಿ ತಪ್ಪದಿರಲಿ.

ಶಕ್ತಿ ಯೋಧನಲ್ಲಿ ಇರಲಿ
ವೈರಿ ಉಳಿಯದಿರಲಿ,
ಗೆಲುವು ಎಂದೂ ಸತ್ಯಕಿರಲಿ
ಧರ್ಮ ಅಳಿಯದಿರಲಿ.

1 comment:

  1. Glad that your blog is active... I wish I could read your poems... Poetry is what is lost in transaltion...
    :-(

    Suma

    ReplyDelete